2.22.2009

ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕ್ಕೆ ಸಾಟಿ ಬೇರಿಲ್ಲ...............







ಹಾಯ್ ಫ್ರೆಂಡ್ಸ್.....
ನಾಡಿನಾದ್ಯಂತ ಈ ದಿನ ಶಿವನ ಭಕ್ತರು ಭಯಭಕ್ತಿಯಿಂದ ಶಿವನ ಆರಾಧನೆಯಲ್ಲಿ ತೊಡಗಿರುತ್ತಾರೆ. ಮೈಸೂರಿನ ನಂಜನಗೂಡು ದಕ್ಷಣಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ. ಇಂಥ ನಂಜುಂಡೇಶ್ವರನ ದರ್ಶನಕ್ಕೆ ಭಕ್ತರು ಮುಗಿಬೀಳುವುದು ಸಹಜ. ಆದರೆ ಎಲ್ಲರಿಗೂ ಈ ಭಾಗ್ಯ ಲಭಿಸದು. ಸೋ, `ಜಸ್ಟ್ಕನ್ನಡ' ಬ್ಲಾಗಿಸುವವರಿಗೆ ಹೆಲ್ಪ್ ಆಗಲಿ ಅನ್ನೋ ಕಾರಣಕ್ಕೆ ನಂಜುಂಡೇಶ್ವರನ ದರ್ಶನವನ್ನು ಇಂಟರ್ನೆಟ್ ಮೂಲಕವೇ ಮಾಡಿಸ್ ಬೇಕು ಅನ್ನೋದು ಉದ್ದೇಶ. ಈ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ. ಕ್ಯಾಮೆರಮನ್, ಗೆಳೆಯ ಜಯಂತ್ ನೀಡಿದ ಸಹಕಾರಕ್ಕೆ ಧನ್ಯವಾದ.
ಸ್ನೇಹಿತರಾದ ಜಯಂತ್, ಗುರು, ಹಾಗೂ ಈಶ್ವರ್ ಸಿಂಗ್ ಬೆಳಗ್ಗೆ 7 ಗಂಟೆಗೆ ಎದ್ದು ಬೈಕನ್ನೇರಿ ನಂಜನಗೂಡು ತಲುಪಿ ಶಿವನ ದರ್ಶನ ಮಾಡಿ ಬಂದಿದ್ದಾರೆ. ಜತೆಗೆ ಪ್ರಸಾದವನ್ನು ತಂದಿದ್ದರು. ಆ ಮೂಲಕ ಬ್ಲಾಗಿಸುವವರಿಗೂ ಶಿವನ ದರ್ಶನ ಭಾಗ್ಯ ನೀಡಿದ್ದಾರೆ. ಸೇ ಥ್ಯಾಕ್ಸ್ ಟು ದಿಮ್.
ಇದೇ ರೀತಿ ಮೈಸೂರಿನ ಅರಮನೆ ಆವರಣದ ಶಿವನ ದೇವಾಲಯದಲ್ಲೂ ಚಿನ್ನದ ಕೊಳಗ ಧರಿಸಿದ ಲಿಂಗ, ಅಗ್ರಹಾರದ ದೇವಾಲಯದಲ್ಲಿನ 101 ಶಿವನ ಲಿಂಗವನ್ನು ಸಹ ಬ್ಲಾಗಿಸುವವರ ದರ್ಶನಕ್ಕೆ ನೀಡಲಾಗಿದೆ.

No comments:

Post a Comment