2.28.2009

ಅಡಿ ಮಚ್ಚನಾ ಪಾರಡಿ..........






ಹಾಯ್ ಫ್ರೆಂಡ್ಸ್..ಇ ದಿನದ ಬ್ಲಾಗ್ ಸಿಂಪ್ಲಿ ಸ್ಪೆಷಲ್. ಯಾಕೆ ಗೊತ್ತ..? ಮೈಸೂರು ಜಿಲ್ಲೆಯ ಸೆಲೆಬ್ರಿಟಿಯೊಬ್ಬರ ಖಾಸ ಜೀವನದ ಬಗ್ಗೆ ಹೇಳುವ ಅವಕಾಶ ಸಿಕ್ಕಿರೋದಕ್ಕೆ ಹಾಗೂ ಅಂಥ ಒಂದು ಫೋಟೋ ನಿಮಗಾಗಿ ತೋರಿಸುತ್ತಿರುವುದಕ್ಕೆ. ಅವರೇ ಮಣಿವಣ್ಣನ್, ಅಲಿಯಾಸ್ ಅಂದಕಾಲತ್ತಿಲೇ ಡೆಮಾಲಿಷನ್ ಮ್ಯಾನ್.
ಅರೇ ಇದೇನಿದು ಪಕ್ಕಾ ತಮಿಳ್ ಸ್ಟೈಲ್ನಲ್ಲಿ ಸ್ಟೆಪ್ ಹಾಕ್ತಿದಾರಲ್ಲ. ಯಾರಾದ್ರು ನೋಡಿದ್ರೇ ಏನ್ ಗತಿ ಅನ್ನೋ ಭಯ ಬೇಡ. `9' ಚಿಂತೆಯಂತೂ ಇಲ್ವೆ ಇಲ್ಲ. ಬಿಕಾಸ್ ಇದು ನಡೆದಿರೋದು ದೂರದ ದಿಲ್ಲಿಯಲ್ಲಿ. ಫೆ.16ರಿಂದ ಮೂರು ದಿನಗಳ ಕಾಲ ದಿಲ್ಲಿಯಲ್ಲಿ ಮಣಿವಣ್ಣನ್ರ ಮಚ್ಚಾ ಅಲಿಯಾಸ್ ಬ್ರದರ್ ಇನ್ ಲಾ ಸಾಕೇತ್ ಚೌಹಾಣ್ ಹಾಗೂ ನಿಖಿತಾರ ಮ್ಯಾರೇಜ್ ಅರೇಂಜ್ ಆಗಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಅವರ ಕುಟುಂಬದ ಚೊಚ್ಚಲ ಸನ್ ಇನ್ ಲಾ ಅಲಿಯಾಸ್ ಮಾಪಿಳೈ ಅಲಿಯಾಸ್ ಅಳಿಯ ಮಣಿ ಈ ರೀತಿ ಮಸ್ತ್ ಮಜಾ ಮಾಡಿದ್ದಾರೆ. ಸೌತ್ ದಿಲ್ಲಿಯ ಮಲ್ಲು ಫಾರ್ಮನಲ್ಲಿ ನಡೆದ ಮೂರು ದಿನಗಳ ಮ್ಯಾರೇಜ್ ಸೆಲೆಬ್ರೇಷನ್ನಲ್ಲಿ ಮಣಿ ಮಿಂಚಿದ್ದು ಹೀಗೆ.
* ಉತ್ತರ ದೃವಧಿಂ....ದಕ್ಷಿಣ ದೃವಕೂ........
ಮೈಸೂರು ನಗರ ಪಾಲಿಕೆ ಆಯುಕ್ತರಾಗಿ ವಗರ್ಾವಣೆಗೊಂಡು ಬಳಿಕ ಅದೇ ಅವಧಿಯಲ್ಲಿ ಮುಡಾ ಆಯುಕ್ತರಾಗಿ ನಂತರ ಜಿಲ್ಲಾಧಿಕಾರಿಯಾಗಿ ಇಲ್ಲೇ ನೆಲೆ ನಿಂತ ಮೈಸೂರು ಅಧಿಕಾರಿಗಳ ಪೈಕಿ ಬಹುಶಃ ಮಣಿ ಮೊದಲಿಗರು. ಇಂತಿರ್ಪ ನಮ್ಮ ಡಿಸಿ ಮೂಲತಃ ತಮಿಳುನಾಡಿನವರು. ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಕನರ್ಾಟಕದಲ್ಲಿ ಸೇವೆ ಅರಸಿಕೊಂಡರು. ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಚುನಾವಣಾಧಿಕಾರಿಯಾಗಿ ಮಣಿ ನಿರ್ವಹಿಸಿದ ಕಾರ್ಯ ಮೆಚ್ಚುಗೆ ಪಡೆದದ್ದು ತಿಳಿದದ್ದೆ. ಸದಾ ಗಂಭೀರ ವದನರಾಗಿರುವ ಮಣಿವಣ್ಣನ್ ಸಹ ದಶಕಗಳ ಹಿಂದೆ `ಕಾದಲ್ನ್' ಆಗಿದ್ದವರೇ.
ಬಿಹಾರದಲ್ಲಿನ `ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ' (ಸೇಯೈಲ್)ಕಂಪನಿಯಲ್ಲಿ ಮಣಿವಣ್ಣನ್ ಕೆಲಸ ಮಾಡುತ್ತಿದ್ದಾಗಲೇ ಈ ಪ್ರೇಮ ಪ್ರಕರಣ ನಡೆದದ್ದು. ದಿಲ್ಲಿಯ ಐಐಟಿ ಸ್ಟೂಡೆಂಟ್ ಆಗಿ ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವಂದನಾ ಚೌಹಾಣ್, ಮಣಿ ಮನಸ್ಸನ್ನು ಕದ್ದರು. ಬಳಿಕ ಇದು ವರ್ಷದಲ್ಲೇ ಅವರನ್ನು `ಸಪ್ತಪದಿ' ತುಳಿಯುವಂತೆ ಮಾಡಿತು.
ಐಎಎಸ್ ತರಬೇತಿ ಪೂರ್ಣಗೊಂಡ ಬಳಿಕ ಮಣಿವಣ್ಣನ್ ಕನರ್ಾಟಕದಲ್ಲಿ ನೆಲೆ ಕಂಡುಕೊಂಡರು. ಸೋ ಮಡದಿ ವಂದನಾ ಸಹ ಪತಿ ಹಾದಿ ಹಿಡಿದರು. ಆರಂಭದಲ್ಲಿ ಚಿಕ್ಕಮಗಳೂರಿನ ರೆಸಿಡೆನ್ಸಿಯಲ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರಿಬ್ಬರ ಏಕಮೇವ ಕುಮಾರನೇ `ಅಮೋಘ'.
ತಮಿಳುನಾಡಿನ ಮೂಲದ ಮಣಿವಣ್ಣನ್ ಪ್ರೇಮಿಸಿದಾಕೆ ಉತ್ತರ ಭಾರತದವರು. ಮದುವೆಯಾಗಿ ದಶಕಗಳು ಸಮೀಪಿಸುತ್ತಿರುವ ವೇಳೆಗೆ ಮತ್ತೆ ಅಂಥದ್ದೆ ಒಂದು ಸಮಾರಂಭದಲ್ಲಿ ಭಾಗವಹಿಸಿ `ಫ್ಲಾಶ್ ಬ್ಯಾಕ್' ಸವಿಯುವ ಲಕ್.

(ವಿ.ಸೂ: ಮಣಿ ಪರ್ಸನಲ್ ಮ್ಯಾಟರ್ ಬಗ್ಗೆ ಇನ್ಫಾರ್ಮೇಷನ್ ನೀಡಿ ಸಹಕರಿಸಿದ ಎಚ್ಎಂಎ ಅಲಿಯಾಸ್ `ಬಿಬಿ'ಗೆ `ರುಂಭಾ ನಂಡ್ರಿ')

2.22.2009

ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕ್ಕೆ ಸಾಟಿ ಬೇರಿಲ್ಲ...............







ಹಾಯ್ ಫ್ರೆಂಡ್ಸ್.....
ನಾಡಿನಾದ್ಯಂತ ಈ ದಿನ ಶಿವನ ಭಕ್ತರು ಭಯಭಕ್ತಿಯಿಂದ ಶಿವನ ಆರಾಧನೆಯಲ್ಲಿ ತೊಡಗಿರುತ್ತಾರೆ. ಮೈಸೂರಿನ ನಂಜನಗೂಡು ದಕ್ಷಣಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ. ಇಂಥ ನಂಜುಂಡೇಶ್ವರನ ದರ್ಶನಕ್ಕೆ ಭಕ್ತರು ಮುಗಿಬೀಳುವುದು ಸಹಜ. ಆದರೆ ಎಲ್ಲರಿಗೂ ಈ ಭಾಗ್ಯ ಲಭಿಸದು. ಸೋ, `ಜಸ್ಟ್ಕನ್ನಡ' ಬ್ಲಾಗಿಸುವವರಿಗೆ ಹೆಲ್ಪ್ ಆಗಲಿ ಅನ್ನೋ ಕಾರಣಕ್ಕೆ ನಂಜುಂಡೇಶ್ವರನ ದರ್ಶನವನ್ನು ಇಂಟರ್ನೆಟ್ ಮೂಲಕವೇ ಮಾಡಿಸ್ ಬೇಕು ಅನ್ನೋದು ಉದ್ದೇಶ. ಈ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ. ಕ್ಯಾಮೆರಮನ್, ಗೆಳೆಯ ಜಯಂತ್ ನೀಡಿದ ಸಹಕಾರಕ್ಕೆ ಧನ್ಯವಾದ.
ಸ್ನೇಹಿತರಾದ ಜಯಂತ್, ಗುರು, ಹಾಗೂ ಈಶ್ವರ್ ಸಿಂಗ್ ಬೆಳಗ್ಗೆ 7 ಗಂಟೆಗೆ ಎದ್ದು ಬೈಕನ್ನೇರಿ ನಂಜನಗೂಡು ತಲುಪಿ ಶಿವನ ದರ್ಶನ ಮಾಡಿ ಬಂದಿದ್ದಾರೆ. ಜತೆಗೆ ಪ್ರಸಾದವನ್ನು ತಂದಿದ್ದರು. ಆ ಮೂಲಕ ಬ್ಲಾಗಿಸುವವರಿಗೂ ಶಿವನ ದರ್ಶನ ಭಾಗ್ಯ ನೀಡಿದ್ದಾರೆ. ಸೇ ಥ್ಯಾಕ್ಸ್ ಟು ದಿಮ್.
ಇದೇ ರೀತಿ ಮೈಸೂರಿನ ಅರಮನೆ ಆವರಣದ ಶಿವನ ದೇವಾಲಯದಲ್ಲೂ ಚಿನ್ನದ ಕೊಳಗ ಧರಿಸಿದ ಲಿಂಗ, ಅಗ್ರಹಾರದ ದೇವಾಲಯದಲ್ಲಿನ 101 ಶಿವನ ಲಿಂಗವನ್ನು ಸಹ ಬ್ಲಾಗಿಸುವವರ ದರ್ಶನಕ್ಕೆ ನೀಡಲಾಗಿದೆ.

2.07.2009

ನಗರದಲ್ಲಿ ನಾಯಕರು............




ಇದು ಆಧರಣೀಯ ವಿಜಯಶಂಕರ್ ಜೀ.....ಅವರ ಚುಕುಬುಕು ರೈಲು ಪ್ರಯಾಣದ ಪುರಾಣ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಕಾರಣವೋ ಅಥವಾ ಬೆಂ-ಮೈ ಜೋಡಿ ಹಳಿ ಕಾಮಗಾರಿ ಶುರುಗೊಳ್ಳುತ್ತಿರುವ ಕಾರಣವೋ ಅಂತು ಪರಿಶೀಲನೆಗೆ ತೆರಳಿದ್ದರು.
ಈ ನಮ್ಮ ಪಯಣ ಆರಂಭದಲ್ಲೇ ಎಡವಟ್ಟಾಯಿತು. ಮುಂಜಾನೆ 9.15ಕ್ಕೆ ಪಿಕ್ಅಪ್ ಎಂದು ಸಂಸದ ಸಹಾಯಕ ತಿಳಿಸಿದ್ದರೂ ಅವರೇ ನಾಪತ್ತೆ. ಇದರಿಂದ ಕೆಂಡಾಮಂಡಲರಾದ ಸೀನಿಯರ್ ರೀಪೋರ್ಟರ್, ಟೈಮ್ಸ್ ಆಫ್ ಇಂಡಿಯಾದ ಮರ್ಮಮಕಲ್ ಸಂಸದರನ್ನು ತರಾಟೆ ತೆಗೆದುಕೊಂಡರು. ಗಂಟೆಗಳ ಕಾಲ ತಡವಾಗಿ ಬದ್ದದ್ದನ್ನು ಪ್ರಶ್ನಿಸಿದರು. ಇದರಿಂದ ಶಂಕರ್ ಜೀ ಮೂಡ್ ಔಟ್...
ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಕಾಲದ ಶಸ್ತ್ರಗಾರ ಸಂಗ್ರಹ ಕೋಣೆಗೆ ಪ್ರವೇಶ ಪಡೆದದ್ದೊಂದು ಸಾಧನೆಯೇ ಸರಿ. ಸುಮಾರು 7 ಅಡಿ ಆಳದಲ್ಲಿರುವ ಈ ಗುಂಬಸ್ ಮಾದರಿ ಕಟ್ಟಡ ಪ್ರವೇಶಿಸಿದವರಲ್ಲಿ ಮರ್ಮಕಲ್, ಕಸ್ತೂರಿ ಸುಧಿ, ಸುವರ್ಣ ನವೀನ ಹಾಗೂ ಕ್ರೊನಿಕಲ್ನ ಕೃಷ್ಣ ಮೊದಲಿಗರು. ಈ ಪೈಕಿ ಕೃಷ್ಣಗೆ ಮಾತ್ರ ತುಂಬಾ ನಿರಾಸೆ. ಕಾರಣ ಆತ ಎನಿಸಿದ್ದಂತೆ ಅಲ್ಲಿ ಏನು ನಡೆಯಲಿಲ್ಲ ಆದ್ದರಿಂದ. (ಹೆಚ್ಚಿನ ಮಾಹಿತಿಗೆ ಕ್ರೊನಿಕಲ್ ಕೃಷ್ಣನನ್ನು ಸಂಪಕರ್ಿಸಿ)
ನಮ್ಮ ಈ ಪಯಣದಲ್ಲಿ ಈ ಟಿವಿಯ ರಮೇಶ್ ಪೆರ್ಲ ಮಾಡಿದ ತರ್ಲೆ ಕೂಡ ತಮಾಷೆಯಾಗಿಯೇ ಇತ್ತು. ಸಂಸದರನ್ನು ಈತ ಗೋಳು ಹೂಯ್ದುಕೊಂಡ ಪರಿ ಕಂಡ ವ್ಯಾನ್ನಲ್ಲಿದ್ದ ಇತರ ಮಿತ್ರರು ಸಕತ್ ಮಜಾ ಅನುಭವಿಸಿದರು.
ಕಡೆಗೆ ಪಯಣದ ಅಂತ್ಯದಲ್ಲಿ ಸಂಸದರು, ವ್ಯಾನ್ ನಿಂದ ಇಳಿಯುವಾಗ `ನನ್ನ ಮೂಡ್ ಸರಿಯಾಗಲು ಗಂಟೆಗಳೇ ಬೇಕಾಯಿತು' ಎಂದು ಕಲಾವಿದನ ಶೈಲಿಯಲ್ಲಿ ಇನ್ನೊಂದು ನಮಸ್ಕಾರ ಮಾಡಿ ಇಳಿದ್ರು.
ಅರೇ ಈ ಪೋಟೋ ಬಗ್ಗೆ ಏನು ಹೇಳ್ಲೆ ಇಲ್ಲ ಅಂದ್ಕೋತ್ತಿದೀರಾ......ಜಸ್ಟ್ ಎ ಮಿನಿಟ್... ಇದು ನಾನು, ಸುದೇಶ, ರವೀಶ, ಮಹೇಶ, ಹಾಗೂ ಕಿಶೋರ ಒಟ್ಟಾಗಿ ಸೇರಿ ತೆಗೆಸಿಕೊಂಡ ಫೋಟೋ. ಹೇಳಿ ಹೇಗಿದೆ. ಒಂಥರಾ `ನಗರದಲ್ಲಿ ನಾಯಕರು' ಸಿನಿಮಾದ ಪೋಸ್ಟರ್ ಥರಾ ಇಲ್ವಾ...

ವೆಂಕಟ ತಂದ ಸಂಕಟ







ಹಾಯ್..ಸ್ವಲ್ಪ ತಡವಾಯಿತು. ದಿನ ಬ್ಲಾಗ್ಗೆ ಬರೀಬೇಕು ಅಂಥ ಅನ್ಕೋತೀನಿ. ಬಟ್ ಆದರೆ ಸೀರಿಯಸ್ನೆಸ್ಸ್ ಇನ್ನು ಬಂದಿಲ್ಲ. ಆದ್ದರಿಂದ ವಾರಕ್ಕೆರೆಡು ಸಲ ಅನ್ನೋ ಹಾಗಾಗಿದೆ.
ಈ ವಾರ ಎರಡು ವಿಷ್ಯದ ಬಗ್ಗೆ ಹೇಳ್ಲೇ ಬೇಕು. ಒಂದು ವೆಂಕಟ ಇನ್ ಸಂಕಟ. ಇದಕ್ಕೆ ಕ್ಲೋಸ್ಲಿ ರಿಲೇಟೆಡ್ ಇನ್ನೊಂದು ನ್ಯೂಸ್ ಅಂದ್ರೆ ಮಣಿ ಅಲಿಯಾಸ್ ಮಣಿವಣ್ಣನ್ ಇನ್ ಸಂಕಟ.
ಮೊದ್ಲ್ನೇದು ಫಿಲ್ಮಂಗೆ ಸಂಬಂಧಿಸಿದ್ದು. ಕನ್ನಡ ಅಂದಕಾಲತ್ತಿಲೇ ಚಾಕಲೋಟ್ ಹೀರೋ ಹಾಲಿ ಕಾಮಿಡಿ ಹೀರೋ ರಮೇಶ್ ನಿದರ್ೇಶನ ಕಂ ಅಭಿನಯದ ವೆಂಕಟ ಇನ್ ಸಂಕಟ. ಈ ಚಿತ್ರದ ಪ್ರೆಸ್ಮೀಟ್ ಹೋಟೆಲ್ ಸಂದೇಶ್ ದಿ ಪ್ರಿನ್ಸ್ನಲ್ಲಿ ಕರೆಯಲಾಗಿತ್ತು. ಇದರ ಪ್ರಮುಖ ಆಕರ್ಷಣೆ ಅಂದ್ರೆ, ಶಮರ್ಿಳಾ ಮಾಂಡ್ರೆ, ಸಜನಿ ಚಿತ್ರದ ಈ ಸಾಜಿನಿ ಗೋಷ್ಠಿಯ ಸೆಂಟರ್ ಆಫ್ ಅಟ್ರಾಕ್ಷನ್.
ನವಗ್ರಹ ಚಿತ್ರದ ಮೂಲಕ `ಕಣ್ ಕಣ್ನ ಸಲಿಗೆ......ಸಲಿಗೆ ಅಲ್ಲ ಇದು ಸುಲಿಗೆ.....ಹಾಡಿನ ಮೂಲಕ ಚಿತ್ರ ಪ್ರೇಮಿಗಳ ಹೃದಯ ಸುಲಿಗೆ ಮಾಡಿದ ಈ ಮೋಹಕ ಮದನಾರಿ ಕನ್ನಡದ ಸಮಸ್ತ ನಾಯಕಿಯರೂ ನಾಚುವಂತೆ ವೆಂಕಟದಲ್ಲಿ ನತರ್ಿಸಿದ್ದಾಳೆ. ಚಿತ್ರದ ನಾಯಕ್ ವೆಂಕಟ್ ಉರುಫ್ ರಮೇಶ್, ಈ ವಿಷಯ ಬಹಿರಂಗ ಪಡಿಸಿದರು. ಕೃತಕ ಮಳೆಯಲ್ಲಿ ನೆನೆಯುತ್ತ ಹಾಡಿ ಕುಣಿದಿರುವ ಶಮರ್ಿಳಾ ಮಾಂಡ್ರೆ, ಬಾಲಿವುಡ್ನ ರಂಗೀಲ ಶಮರ್ಿಳಾಗೆ ಸೈಡ್ ಹೊಡೆಯುವ ಲಕ್ಷಣಗಳು ಇವೆ ಅನ್ನೊಂದು ರಮೇಶ್ ಅಂಬೋಣ.





ಮಣಿ ಸಂಕಟ .............
ವೆಂಕಟನ ವಿಷ್ಯಯ ಬಿಡಿ. ಈಗ ಸಂಕಟದ ಬಗ್ಗೆ ಬರೋಣ. ಮೈಸೂರಿನ ಡಿಸಿ ಅಲಿಯಾಸ್ ಸೋಕಾಲ್ಡ್ ಕಡಕ್ ಡಿಸಿ ಮಣಿವಣ್ಣನ್ ಸಾಹೆಬ್ರಿಗೂ ಸ್ಯಾರ್ಟಡೆ ಅನ್ನೋದು ನಿಜಕ್ಕೂ `ಶನಿ'ವಾರವೇ ಆಗಿತ್ತು. ಪರಿಣಾಮ ಬೀದಿಯಲ್ಲಿ ಹೋಗುವ `ಡ್ಯಾಶ್' ಅನ್ನು ಹೋಂ ಆಫೀಸ್ಗೆ ಕರೆಸಿಕೊಂಡು ಸಂಕಟ ಎದುರಿಸುವಂತಾಗಿತ್ತು.
ಅದು ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂಬಂಧಿಸಿದ ಸುದ್ದಿಯಿಂದ. ಡಿಸಿ ಹೇಳಿದ್ರೂ ವಾಜಪೇಯಿ ಹೊಗೆ ಹಾಕಿಸಿಕೊಂಡ್ರಂತೆ ಅಂಥ ನಮ್ಮ ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಸಂತಾಪ ಸಭೆ ನಡೆಸಿಯೇ ಬಿಟ್ರೂ. ಅರೇ ಮೀಡಿಯಾದವರಿಗೂ ಈ ಬಗ್ಗೆ ಮಾಹಿತಿನೇ ಇಲ್ಲ. ಅದ್ದೆಂಗೇ ಕುರುಬೂರ್ಗೆ ಹೋಗೆ ಮ್ಯಾಟರ್ ಗೊತ್ತಾಯ್ತು ಅಂತ ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ವಿಷ್ಯದ ಬಾಲ ಮಣಿವಣ್ಣನ್ ಬುಡಕ್ಕೆ ಬಂದು ನಿಂತಿತ್ತು.
ಬಟ್ ದುರಂತ ಅಂದ್ರೆ, ಇಂಥ ಕಮ್ಯೂನಿಕೇಷನ್ ಗ್ಯಾಪ್ನಿಂದ ಉಂಟಾಗುವ ಸಣ್ಣ ಸಣ್ಣ ಪ್ರಕರಣಗಳನ್ನು ಸುದ್ದಿ ಮಾಡುವ ನೈನ್ ಮಿತ್ರರ ಬಗ್ಗೆ ಹೇಳಲೇ ಬೇಕು. ಇಲ್ಲಿ ರೈತ ಮುಖಂಡರು ಉದ್ದೇಶ ಪೂರ್ವಕವಾಗಿ ಸಂತಾಪ ಮಾಡಿಲ್ಲ. ಜತೆಗೆ ದೇಶದ ಪ್ರಧಾನಿ ಸತ್ತ ಸುದ್ದಿ ಕನ್ರ್ಫಂ ಮಾಡುವ ಜವಾಬ್ದಾರಿ ಜಿಲ್ಲಾಧಿಕಾರಿಯದ್ದು ಅಲ್ಲ. ಅಂದ ಮೇಲೆ ಇದಕ್ಯಾಕೆ ಇಷ್ಟು ಪ್ರಾಮುಖ್ಯತೆ ಕೊಡಬೇಕಿತ್ತು ಎಂಬ ಪ್ರಶ್ನೆ ಮೂಡುತ್ತದೆ. ಪಾಪ ರೈತರೇನೋ ತಿಳಿಯದೇ ಸಂತಾಪ ಸೂಚಿಸಿದರೆ, ಅಸಂತೃಪ್ತ ಬಿಜೆಪಿ ಕಾರ್ಯಕರ್ತರು ಮಾತ್ರ ತಿಳಿದು ತಿಳಿದೇ ಡಿಸಿ ನಿವಾಸ ಎದುರು ಪ್ರತಿಭಟನೆ ನಡೆಸಿದ್ರು. ಇದರ ಕಾರಣ ಏನು ಅನ್ನೋದು ಮಾತ್ರ ಒಪನ್ ಸಿಕ್ರೇಟ್........ಹ್ಹಹ್ಹಹ್ಹ



----------------------------

2.03.2009

journy ....ದ ಪಯಣ


  • ರೂಟ್ನಂಬರ್೨೪.....
    ಬ್ಲಾಗ್ ತುಂಬಾ ದಿನದಿಂದ ಬರೀಬೇಕು ಅಂತ ಪ್ಲಾನ್ ಹಾಕ್ತ ಇದ್ದೇ.. ಟೈಮ್ ಸಿಕ್ಕಿರ್ಲಿಲ್ಲ.. ಈಗ ಅದಕ್ಕೆ ಕಾಲ ಕೂಡಿ ಬಂತು. ಸೋ ಇದ್ರಲಿ ಇರೋ ವಿಷ್ಯ ಸ್ವಲ್ಪ ಔಟ್ಡೇಟೆಡ್ ಆಗಿರುತ್ತೆ. ಮಾರತ್ತಳ್ಳಿ ಇಂದ ನನ್ favourite ಏರಿಯಾ ರಾಜಾಜಿ ನಗರಕ್ಕೆ ಶಿಫ್ಟ್ ಆದಾಗಿನಿಂದ ನನ್ನ ದಿನಚರಿ ಹೀಗಿದೆ..
ನನ್ನ ದಿನಚರಿ ಹೇಳೋಕ್ ಮೊದ್ಲು ..ನಾ ಯಾಕೆ ಮಾರತ್ತಳ್ಳಿ ಇಂದ ರಾಜಾಜಿ ನಗರಕ್ಕೆ ಶಿಫ್ಟ್ ಆದೇ ಅಂತ ಹೇಳ್ತೀನಿ.. ಮಾರತ್ತಳ್ಳಿ ಆಫೀಸ್ ಗೆ ತುಂಬಾ ಹತ್ರ..ಸೊ ಆಫೀಸ್ ಇಂದ ಮನೆಗೆ ಹೋಗಿ ಏನು ಮಾಡೋದು ಅನ್ನೋ ಫೀಲಿಂಗ್ ಬರ್ತಾ ಇತ್ತು ಮತ್ತೆ ಲೇಟ್ ಆಗಿ ಏಳುವುದು.. ಲೇಟ್ ಆಗಿ ಮಲುಗುವುದು ನಡೀತಾ ಇತ್ತು.. ಜೀವನ ದಲ್ಲಿ ಒಂದ್ ಆರ್ಡರ್ ಅನ್ನೋದೇ ಇರ್ಲಿಲ್ಲ. ರಾಜಾಜಿ ನಗರಕ್ಕೆ ಶಿಫ್ಟ್ ಆದ್ರೆ... ಬೆಳಗೇ ಬೇಗ ಏಳ್ಬೇಕು ..ಆಫೀಸ್ ಇಂದ ಬೇಗ ಬರಬೇಕು.. ಮತ್ತೆ ಶಟ್ಲ್ ಅಲ್ಲಿ ಓದೋಕೆ ಟೈಮ್ ಸಿಗುತೆ (!!) ಅನ್ನೋ ಲೆಕ್ಕಾಚಾರ ಹಾಕಿ... ರಾಜಾಜಿ ನಗರಕ್ಕೆ ಶಿಫ್ಟ್ ಆದೆ.

ಮೊದಲನೆ ದಿನ ಶಟ್ಲ್ ಅಲ್ಲಿ:.. ಮೊದಲ ದಿನ ಬೆಳಗ್ಗೆ 7 ಗಂಟೆ ಶಟ್ಲ್ ಗೆ 6:30 ಇಂದನೇ ಕಾಯ್ತಾ ಇದ್ದೇ (ಬಸ್ ಮಿಸ್ ಆಗ್ಬಿಟ್ರೆ ಅನ್ನೋ ಭಯ). ನೌಷಾದ್ (ನನ್ ಟೀಮ್ ಮೇಟ್) ಬಿಟ್ಟು ಇನ್ನು ಯಾರು ಪರಿಚಯ ಇರ್ಲಿಲ್ಲ. ಸೋ ಬೆಳಗ್ಗೆ ಮನೆಯಿಂದ ಹೊರಟಾಗ ಬಸ್ ಅಲ್ಲಿ ಫುಲ್ ಸೈಲೆಂಟ್. ನನ್ ಪ್ಲಾನ್ ಸರಿಯಾಗಿದೆ ಅಂತ ಅನಿಸಿತು. ಆದ್ರೆ ನನ್ ಲೆಖ್ಖ ತಪ್ಪು ಅಂತ ತಿಳಿದುದ್ದು ಸಂಜೆ ರಿಟರ್ನ್ ಜರ್ನೀ ಅಲ್ಲಿ...

ರಿಟರ್ನ್ ಜರ್ನೀ.. ನಾ ಶಟ್ಲ್ ಹತ್ತಿದಾಗ ಆಲ್ಮೋಸ್ಟ್ ಫಿಲ್ ಆಗಿತ್ತು ..ಖಾಲಿ ಇರೋ ಒಂದ್ ವಿಂಡೊ ಸೀಟಲ್ಲಿ ಕುಳಿತುಕೊಂಡೆ. ಬಸ್ ಸ್ಟಾರ್ಟ್ ಆಗಿ ಒಂದ್ 10 ನಿಮಿಷಕ್ಕೆ ಎಲ್ಲರೂ ಅಂತ್ಯಾಕ್ಷರಿ ಆಡೊಕೆ ಸ್ಟಾರ್ಟ್ ಮಾಡಿದ್ರೂ.. ಅಷ್ಟೇ.. ನನ್ನ ಓದೋ ಪ್ಲಾನ್ ಬಗಾಲ್ ಆಗೊಯ್ತು ..ನಾನು ಅವ್ರ ಜೊತೆ ಸೇರಿಕೊಂಡೆ ..ಬುಕ್ ವಿಷ್ಯ ಮರ್ತೇವೋಯ್ತು... ಅವತ್ತಿನಿಂದ ಇವತ್ತಿನ ವರೆಗೂ ಒಂದು ಪೇಜ್ ಕೂಡ ಓದೋಕೆ ಆಗ್ಲಿಲ್ಲ . ಈ ಫೀಲಿಂಗ್ ಗಿಂತ ಒಂದ್ ಅಷ್ಟು ಜನ ಒಳ್ಳೇ ಫ್ರೆಂಡ್ಸ್ ಸಿಕಿದ್ರು ಅನ್ನೋ ಖುಷಿ ಇದೆ..

ನನ್ನ ಮೇನ್ ಟಾಪಿಕ್ ಗೆ ವಾಪಸ್ ಬರ್ತೀನಿ ..ನನ್ನ ದಿನಚರಿ ಇನ್ R24.. ನನ್ ಸ್ಟಾಪ್ ( ಸಪ್ತ ಗಿರಿ ಬಾರ್) ಫರ್ಸ್ಟ್ ಸ್ಟಾಪ್ ನಂ ಶಟ್ಲ್ ಗೆ ..ನಾನು, ಮಧು ಮತ್ತೆ ನೌಷಾದ್ ಹತ್ತುತೀವಿ ..ನೆಕ್ಸ್ಟ್ ಸ್ಟಾಪ್ ನವರಂಗ್.. ಒಬ್ರು ಸ್ಪೆಶಲ್ ಪರ್ಸನ್ ಇಲ್ಲಿ ಹತ್ತುತ್ತಾರೆ.. ಆವ್ರು ನಂ ಶಾರುಖ್ ಕಂಬಾರ್. ..ಶಟ್ಲ್ ಗೆ ಯಾವಾಗ್ಲೂ ಲೇಟಾಗಿ ಬಂದು ರನ್ನಿಂಗ್‌ನಲ್ಲಿ ಹತ್ತುತ್ತಾರೆ ( DDLJ style ಅಲ್ಲಿ) ಅದ್ದಕ್ಕೆ ಅವ್ರಿಗೆ ಆ ಹೆಸ್ರು. ನಮ್ಮ ಶಟ್ಲ್ ಲಾಂಗೆಸ್ಟ್ ಚೇಸ್ ಕೂಡ ಅವ್ರ ಹೆಸ್ರಲ್ಲೆ ಇದೆ...( ಚೇಸ್ ಅಂದ್ರೆ ..ಶಟ್ಲ್ ಮಿಸ್ ಮಾಡಿ ಕೊಂಡು ..ಆಟೋ ದಲ್ಲಿ ಚೇಸ್ ಮಾಡಿ ಬಸ್ ಹಿಡಿಯೋದು) ನವರಂಗ್ ಆದ್ಮೇಲೆ ಬಸ್ ಮರಿಯಪ್ಪನ ಪಾಳ್ಯ, ದೇವಯ್ಯ ಪಾರ್ಕ್ ಅಲ್ಲಿ ನಿಲ್ಲಿಸಿ ಒಂದ್ ಅಷ್ಟು ಜನಾನ ಹತ್ತಿಸಿಕೊಳ್ಳುತ್ತೆ....ಅದ್ರಲ್ಲಿ main ಅಂದ್ರೆ ..ರಘು@ ನವರಂಗ್, ಮಂಜು@ದೇವಯ್ಯ ಪಾರ್ಕ್. ನಮ್ ಹುಡುಗ್ರು ಎಲ್ಲರೂ ಶಟ್ಲ್ ಹೋಯ್ತಾ ಅಂತ ಫೋನ್ ಮಾಡಿದ್ರೆ ..ಈ ಮಂಜ ..ಶಟ್ಲ್ ಬಂತಾ ಅಂತ ಫೋನ್ ಮಾಡೋ ಗಿರಾಕಿ.
ದೇವಯ್ಯ ಪಾರ್ಕ್ ಲಾಸ್ಟ್ ಪಿಕಪ್ ಆದ್ಮೇಲೆ ..ನೆಕ್ಸ್ಟ್ happening ಪ್ಲೇಸ್ ಬಂದು..8ತ್ ಕ್ರಾಸ್ ಮಲ್ಲೇಶ್ವರ ..ಇದು ಯಾಕೆ happening ಪ್ಲೇಸ್ ಅಂದ್ರೆ ...ಬಿಕಾಸ್ ಆಫ್ WIPRO ಹುಡುಗಿ... ಆಕೆ ಯಾರು ಎಲ್ಲಿಯವ್ಲೂ ..ಎನ್ ಹೆಸ್ರು ಏನು ಗೊತ್ತಿಲ್ಲ ..ಬಟ್ ನೋಡಿದಾಗಲ್ಲೆಲ್ಲ ಫೋನ್ ಅಲ್ಲಿ ಇರೋವ್ಲೂ..8ತ್ ಕ್ರಾಸ್ ಸ್ಟಾಪ್ ಬಂತು ಅಂಡ್ ತಕ್ಷಣ ..ನಮ್ ಬಸ್ಸಲ್ಲಿ ಇರೋ ಎಲ್ಲರ ಕತ್ತು ಲೆಫ್ಟ್ ಗೆ 90 ಡಿಗ್ರೀ ಟರ್ನ್.. ಎಲ್ಲರ್ ಬಾಯಲ್ಲೂ RAGHU RAGHU ಅಂತ ಕಿರ್ಚಾಟ ..ನೆಕ್ಸ್ಟ್ 5 ಸೆಕೆಂಡ್ ಈ ಹುಡ್ಗಿ ಬಗ್ಗೆ ನೇ ಡಿಸ್ಕಶನ್ ನಡಿಯುತ್ತೆ ..ಬರೀ 5 ಸೆಕೆಂಡ್ ಯಾಕೆ ಅಂದ್ರೆ..8ತ್ ಕ್ರಾಸ್ ಬಸ್ ಸ್ಟಾಪ್ ಆಗಿ 5 ಸೆಕೆಂಡ್ ಗೆ ಒಂದ್ ಗಣಪತಿ ದೇವಸ್ಥಾನಸಿಗುತ್ತೆ ..ನಮ್ ಹುಡುಗ್ರು ಅಲ್ಲೀವರ್ಗು ಹುಡ್ಗಿ ಬಗ್ಗೆ ಕಾಮೆಂಟ್ ಮಾಡ್ತಾ ಇದ್ದೊವ್ರು .. sudden ಆಗಿ ..ಕಣ್ ಮುಚ್ಚಿ ಕೈ ಮುಗಿತಾರೆ ..ಸೋ ಹುಡ್ಗಿ ಟಾಪಿಕ್ ಗೆ 5 ಸೆಕೆಂಡ್ ಬ್ರೇಕ್ ..ಆಮೇಲೆ ಮತ್ತೆ RAGHU ನ ರೇಗಿಸೋದು ಸ್ಟಾರ್ಟ್..
ಶಟ್ಲ್ ಓಲ್ಡ್ ಮದ್ರಾಸ್ ರೋಡ್ ಗೆ ಬರೋ ಅಷ್ಟ್ರಲ್ಲಿ ಎಲ್ಲರೂ ಪಾಚ್ ಕೊಂಡಿರ್ತಾರೆ . .ಆದ್ರೆ ನಾ ಮಾತ್ರ ಎಚ್ಚರ ಇರ್ತೀನಿ ..ದಿನಾ ಸಿಗೋ ಬೆನ್ನಿಗನಹಳ್ಳಿ ಇಂಜಿನಿಯರಿಂಗ್ ಕಾಲೇಜ್ ಹುಡುಗೀರ್ ಗುಂಪು, ಪೆಟ್ರೋಲ್ ಬಂಕ್ ಸ್ಟಾಪ್ ಅಲ್ಲಿ ಕಾಲೇಜ್ ಬಸ್ ಗೆ ಕಾಯುತ್ತಾ ಇರೋ ಒಂದ್ pair .. ಅದ್ರಲ್ಲಿ ಯಾವಾಗಲು ಮಾತಾಡೋ ಹುಡ್ಗಿ.. ಅವ್ಳು ಹೇಳಿದ್ದಕ್ಕೆಲ್ಲ ತಲೆ ಕುಣ್ಸೊ ಹುಡ್ಗ.. ಏನು ಚೇಂಜ್ ಆಗಲ್ಲ...
ಮತ್ತೆ ಬಸ್ ಆಫೀಸ್ ಹತ್ರ ಬರೋ ಅಷ್ಟ್ರಲ್ಲಿ ಎಲ್ಲರೂ ಎಚ್ಚರ ಆಗ್ತಾರೆ ...ID ಕಾರ್ಡ್ ಗೆ ಹುಡುಕಾಟ.. ನಂ ಸುರೇಶ್ ಕೆಲವು ಸಾರಿ ಕೈ ನ ಮೇಲ್ ಮಾಡಿ ಅದುನ್ನೇ ID ಕಾರ್ಡ್ ಅಂತ ತೋರಿಸಿದ್ದು ಇದೆ ..ನಂ ಸೆಕ್ಯೂರಿಟೀ ಅದುನ್ನ ನೋಡ್ಕೊಂಡ್ ಹಂಗೆ ವಾಪಸ್ ಹೋಗಿದ್ದು ಇದೆ.. ನಾನು, ಮಂಜ, ಚೈತ್ರ ಬಿಟ್ಟು ಇನ್ ಎಲ್ಲರೂ ಫರ್ಸ್ಟ್ ಸ್ಟಾಪ್ ಅಲ್ಲಿ ಇಳ್ಕೊತಾರೆ ..ಲಾಸ್ಟ್ ಸ್ಟಾಪ್ ಅಲ್ಲಿ ಚೈತ್ರ ಗೆ ಫೋರ್ಸ್ ಮಾಡಿ ಎಳಿಸ್‌ಬೇಕು ..ಅವ್ರ್ದು ದಿನಾ ಅದೇ ಡೈಲಾಗ್.."ಈ ಆಫೀಸ್ ಯಾಕೆ ಇಷ್ಟ್ ಜಲ್ದಿ ಬರುತ್ತೆ.. ಬೆಳ್ಳಗೆ ಯಾಕೆ ಆಗುತ್ತೆ.."
ಎಲ್ಲರಿಗೂ ಬೈ ಹೇಳಿ ಆಫೀಸ್ ಒಳಗೆ ಹೋಗ್ತೀನಿ .. ಡೆಸ್ಕ್ ಗೆ ಹೋದಮೇಲೆ ..ಅದೇ ಬೇರೆ ಪ್ರಪಂಚ ..ನನ್ನಲಿ ನಾ ಇಲ್ಲ..ಕೆಲಸವೆ ಮನವೆಲ್ಲ..
ರಿಟರ್ನ್ journey ಬಗ್ಗೆ ಇನ್ಯಾವಗಾದ್ರು ಬರೀತೀನಿ...
until then ...ವಸಿ ತಡ್ಕಲಿ...

(he is my brother, called chandan..)

ಒಂದು ಗೊರಿಲ್ಲ ಕಥೆ


ಪೋಲೋ...ದ ಗೋರಿಲ್ಲ...............


ಕಳೆದ ವಾರದ ಪತ್ರಿಕೆಗಳಲ್ಲಿ ಲಿಂಗ ಬದಲಾವಣೆಯದ್ದೆ ಸುದ್ಧಿ. ಮೈಸೂರು ತಾಲೂಕಿನ ಜಯಪುರ ಹೋಬಳಿಯ ಯುವಕನೊಬ್ಬ ಬಲವಂತವಾಗಿ ಯುವತಿಯಾದ ಪ್ರಕರಣ ಒಂದೆಡೆಯಾದರೆ, ಬೆಂಗಳೂರಿನ ಯುವಕನೊಬ್ಬ ಸಹ ಇದೇ ರೀತಿ ಹಿಜಡಾಗಳ ಬಲವಂತಕ್ಕೆ ಸಿಲುಕು ಪುರುಷತ್ವ ಕಳೆದುಕೊಂಡ ದುರಂತ ಕಥೆ ಮತ್ತೊಂದು ಕಡೆ.
ಈ ಎರಡು ಘಟನೆಗಳು ದಿನಪತ್ರಿಕಗಳಲ್ಲಿ ಹಾಗೂ ಎಲೆಕ್ಟ್ರಾನಿಕ್ ಮೀಡಿಯಗಳಲ್ಲಿ ಬಾರಿ ಪ್ರಚಾರ ಪಡೆದುಕೊಂಡವು. ಆದರೆ ಇಂಥದ್ದೆ ಘಟನೆ ತುಸು ಭಿನ್ನವಾಗಿರುವ ಮತ್ತೊಂದು ಪ್ರಕರಣ ಮೈಸೂರು ಮೃಗಾಲಯದಲ್ಲಿ ಬೆಳಕಿಗೆ ಬಂದಿದೆ. ಆದರೆ ಇಲ್ಲಿ ಪುರುಷತ್ವ ಕಳೆದುಕೊಂಡಿರುವುದು ಮನುಷ್ಯನಲ್ಲ, ಬದಲಿಗೆ ಮನುಷ್ಯನ ಪೂರ್ವಜನೆಂದೇ ಜೀವ ವಿಜ್ಞಾನಿಗಳು ಪ್ರತಿಪಾದಿಸುವ ಗೋರಿಲ್ಲ ಎಂಬುದು ವಿಶೇಷ ಸಂಗತಿ.

ಜೀವವಿಜ್ಞಾನಿಗಳ ಪ್ರಕಾರ ಗೋರಿಲ್ಲ ಮಾನವನ ಪೂರ್ವಜ. ಜೀವವಿಕಾಸದ ನಂತರ ಇವೇ ಮಾನವನಾಗಿ ಪರಿವರ್ತನೆಗೊಂಡವು ಎಂಬುದು ಒಂದು ವಾದ. ಇಂದು ಈ ಸಂತತಿ ಅಳಿವಿನಲ್ಲಿದೆ. ಇಡೀ ಏಷ್ಯಖಂಡದಲ್ಲೇ ಮೈಸೂರು ಮೃಗಾಯಲದಲ್ಲಿ ಮಾತ್ರ ಗೋರಿಲ್ಲ ಉಳಿದಿರುವುದು. ಆದರೆ ಇದು ಸಹ ಕಳೆದ ಎಂಟು ವರ್ಷಗಳಿಂದ ಏಕಾಂಗಿ. ಸಂಗಾತಿ ಸಿಕ್ಕರು ಸಂತಾನೋತ್ಪತ್ತಿ ಮಾಡುವ ಸಾಮಥ್ರ್ಯ ಕಳೆದುಕೊಂಡಿರುವ ನತದೃಷ್ಠ ವಾನರ. ಇದಕ್ಕೆ ಕಾರಣ ಮಾನವನ ಅತಿಯಾದ ಬುದ್ಧಿವಂತಿಕೆ ಹಾಗೂ ಸ್ವಾರ್ಥ.

ಮೈಸೂರು ಚಾಮರಾಜ ಮೃಗಾಲಯದ ಆಕರ್ಷಣೆಗಳ ಪೈಕಿ ಇಲ್ಲಿನ ಗೋರಿಲ್ಲ ಮನೆಯಲ್ಲಿ ವಾಸಿಸುತ್ತಿರುವ ಧೈತ್ಯ ಜೀವಿ `ಪೋಲೋ' ಪ್ರಮುಖವಾದದ್ದು. ಐರ್ಲೆಂಡ್ ದೇಶದ ಡಬ್ಲಿನ್ ಮೃಗಾಲಯದಿಂದ ಇದನ್ನು 1995ರಲ್ಲಿ ಮೈಸೂರಿಗೆ ಕರೆತರಲಾಗಿದೆ. 35 ವರ್ಷ ವಯಸ್ಸಿನ ಈ ಗೋರಿಲ್ಲ `ಗಿಫ್ಟ್'ರೂಪದಲ್ಲಿ ಮೈಸೂರಿನ ಮೃಗಾಲಯಕ್ಕೆ ನೀಡಲಾಗಿತ್ತು. ಆದರೆ ಹೀಗೆ ಕೊಡುಗೆ ನೀಡುವಾಗಲೇ ಈ ಗೋರಿಲ್ಲದ ಜನನಾಂಗ ನಿಷ್ಕ್ರೀಯಗೊಳಿಸುವ ಸಲುವಾಗಿ ದೇಹದಿಂದ ಬೇರ್ಪಡಿಸಿರುವ ಬಗ್ಗೆ ಶಂಕೆ ಮೂಡಿದೆ. ಐರ್ಲೆಂಡ್ನ ಈ ದೈತ್ಯಜೀವಿ ಮೈಸೂರು ಮೃಗಾಲಯಕ್ಕೆ ಬಂದ ಮೇಲೆ ತನ್ನ ಸಂತತಿ ಅಭಿವೃದ್ಧಿಪಡಿಸುವಲ್ಲಿ ವಿಫಲಗೊಂಡಿರುವುದು ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ.

ಪೋಲೋ ಮೈಸೂರು ಮೃಗಾಲಯಕ್ಕೆ ಆಗಮಿಸುವ ಮುನ್ನ ಇಲ್ಲಿ ಸುಗ್ರೀವಾ ಮತ್ತು ಸುಮತಿ ಜೋಡಿ ಇತ್ತು. ಆದರೆ ಸುಗ್ರೀವಾ ನಿಧನದ ಬಳಿಕ ಸುಮತಿ ಏಕಾಂಗಿ. ಈ ಕಾರಣಕ್ಕಾಗಿಯೇ ಪೋಲೋ ಮೈಸೂರು ಮೃಗಾಲಯಕ್ಕೆ ಗಿಫ್ಟ್ ರೂಪದಲ್ಲಿ ಲಭಿಸಿದಾಗ ಮೃಗಾಲಯ ಸಿಬ್ಬಂದಿ ಸಂತಸಗೊಂಡಿದ್ದರು. ಕಾರಣ ಹೊಸ ಜೋಡಿಯಿಂದ ಸಂತಾನ ನಿರೀಕ್ಷಿಸಿದ್ದರು. ಆದರೆ 1995ರಿಂದ 2000ದ ವರೆಗೂ ಪೋಲೋ-ಸುಮತಿ ಜತೆಜತೆಯಲ್ಲೇ ಕಾಲ ಕಳೆದರೂ ಏನು ಪ್ರಯೋಜನವಾಗಲಿಲ್ಲ. ಸುಮತಿ ಗರ್ಭದರಿಸಲೇ ಇಲ್ಲ. ಕಡೆಗೆ 2000ನೇ ಇಸವಿಯಲ್ಲಿ ಸುಮತಿ ಹೃದಯಘಾತದಿಂದ ನಿಧನ ಹೊಂದಿದಳು. ಅಲ್ಲಿಗೆ ಗೋರಿಲ್ಲ ಸಂತತಿ ಅಭಿವೃದ್ಧಿಪಡಿಸುವ ಮೃಗಾಲಯದ ಅಧಿಕಾರಿಗಳ ಆಸೆ ಕಮರಿ ಹೋಯಿತು.

ಪೋಲೋ ಸ್ಪೆಷಲ್ :
ಪೋಲೋ ಬೆನ್ನಿನ ಭಾಗದ ಸಿಲ್ವರ್ ಬಣ್ಣದಲ್ಲಿದೆ. ಈ ಕಾರಣಕ್ಕಾಗಿಯೇ ಇಂಥ ಗೋರಿಲ್ಲಗಳನ್ನು `ಸಿಲ್ವರ್ ಬ್ಯಾಕ್' ಗೋರಿಲ್ಲ ಎಂದು ಕರೆಯಲಾಗುತ್ತದೆ.
ಕಾಡಿನಲ್ಲಿ ವಾಸಿಸು ಗೋರಿಲ್ಲ ಸಂಘಜೀವಿ. ಆದ್ದರಿಂದಲೇ ಇವು ಗುಂಪು ಗುಂಪಾಗಿ ಜೀವಿಸುತ್ತದೆ. ಅಂಥ ಸಮಯದಲ್ಲೆಲ್ಲ ಇಂಥ `ಸಿಲ್ವರ್ ಬ್ಯಾಕ್' ಹೊಂದಿರುವ ಗೋರಿಲ್ಲವೇ ತಂಡದ ಕ್ಯಾಪ್ಟನ್ಶಿಪ್ ವಹಿಸುವುದು. ಇಂಥ `ಕ್ಯಾಪ್ಟನ್'ಜಾತಿಗೆ ಸೇರಿದ್ದೇ ಈ ಪೋಲೋ.

1972ರಲ್ಲಿ ಪೋಲೋ ಜನಿಸಿರುವ ಬಗ್ಗೆ ದಾಖಲೆಗಳಿವೆ. ಕಾಡಿನ ಈ ಜೀವಿಯನ್ನು ಸಂರಕ್ಷಣೆ ಮಾಡಿ ಐರ್ಲೆಂಡ್ನ ಮೃಗಾಲಯದಕ್ಕೆ ಕರೆ ತಂದ ಬಳಿಕ ಪೋಲೋ ಅನೇಕ ಮರಿಗಳ ಜನನಕ್ಕೆ ಕಾರಣವಾಗಿದೆ. ಆ ಮೂಲಕ ಅಲ್ಲಿ ಗೋರಿಲ್ಲ ಸಂತತಿಯನ್ನು ಅಭಿವೃದ್ಧಿಪಡಿಸಿದ ಕೀತರ್ಿ ಪೋಲೋಗೆ ಸಲ್ಲುತ್ತದೆ.( ಈ ಬಗ್ಗೆ ಮೈಸೂರು ಮೃಗಾಲಯ ಹೊರ ತಂದಿರುವ ಕೈಪಿಡಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಪೋಲೋ ಸಂತಾನ ಪ್ರಾಪ್ತಿಯಲ್ಲಿ ಸಮರ್ಥ ಎಂಬುದಕ್ಕೆ ಇದು ದಾಖಲೆ ಎನ್ನಲು ಅಡ್ಡಿ ಇಲ್ಲ.)
ಅಂದಾಜು 175ರಿಂದ 180 ಕೇ.ಜಿ ತೂಕವಿರುವ ಈ ದೈತ್ಯ ಪ್ರಾಣಿ ಈಗ ಏಷ್ಯಾದಲ್ಲಿ ಜೀವಂತವಾಗಿರುವ ಏಕೈಕ ಗೋರಿಲ್ಲ. ಈ ಕಾರಣಕ್ಕಾಗಿಯೇ ಪೋಲೋಗೆ ಮೈಸೂರು ಮೃಗಾಲಯದಲ್ಲಿ ವಿಶೇಷ ಆರೈಕೆ. ಪ್ರತಿ ನಿತ್ಯ ವಿವಿಧ ಬಗೆಯ ಹಣ್ಣು, ಸೊಪ್ಪು, ತರಕಾರಿಗಳನ್ನು ಪೋಲೋಗೆ ನಿಗಧಿತ ಸಮಯಕ್ಕೆ ಸರಿಯಾಗಿ ನೀಡಲಾಗುತ್ತದೆ. ಜತೆಗೆ ಪ್ರತಿನಿತ್ಯ ಸಂಜೆ ಕುಡಿಯಲು ಚಹಾ ಸಹ ಪೂರೈಸಲಾಗುತ್ತದೆ. ಒಟ್ಟಾರೆ ಮೈಸೂರು ಮೃಗಾಲಯದವರು ಅಳಿವಿನಂಚಿನಲ್ಲಿರುವ ಈ ಅಪರೂಪದ ಅತಿಥಿ ಆಯಸ್ಸನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೈಮೀರಿ ಶ್ರಮಿಸುತ್ತಿದ್ದಾರೆ.

ಇಷ್ಟೆಲ್ಲಾ ವಿಶೇಷತೆ, ಅಚ್ಚರಿಗೆ ಮೂಲವಾದ ಈ ದೈತ್ಯ ಜೀವಿಗೆ ಈಗ ಸಂತಾನ ಅಭಿವೃದ್ಧಿಪಡಿಸಿಕೊಳ್ಳುವ ಸಾಮಥ್ರ್ಯವಿಲ್ಲ ಎಂಬುದು ವಿಷಾಧದ ಸಂಗತಿ. ಸಾಮಾನ್ಯವಾಗಿ ವಿದೇಶಗಳಿಂದ ಪ್ರಾಣಿಗಳನ್ನು ಕೊಡುಗೆ ರೂಪದಲ್ಲಿ ಪಡೆಯುವಾಗ ಆ ಪ್ರಾಣಿಗಳ ಸಂತಾನ ಸಾಮಥ್ರ್ಯ ನಿಷ್ಕ್ರೀಯಗೊಳಿಸಲಾಗುತ್ತದೆ. ಕಾರಣ ಅಪರೂಪದ ತಳಿ ಹೊರ ದೇಶದಲ್ಲಿ ಅಭಿವೃದ್ಧಿ ಹೊಂದುವುದನ್ನು ನಿಯಂತ್ರಿಸಲು . ಮನುಷ್ಯನ ಈ ಸ್ವಾರ್ಥ ಬುದ್ಧಿಯ ಪರಿಣಾಮ ಈಗ ಗೋರಿಲ್ಲ ಸಂತತಿ ಪ್ರಪಂಚದಲ್ಲಿ ಅಳಿವಿನಂಚಿಗೆ ಬಂದಿದೆ. ಕೇವಲ ಮೃಗಾಲಯಗಳಲ್ಲಿ ಮಾತ್ರ ನೋಡುವ ವಾತಾವರಣ ನಿಮರ್ಾಣಗೊಂಡಿದೆ. ಅದರಲ್ಲೂ ಏಷ್ಯಾ ಖಂಡದಲ್ಲಿ ಇಂಥ ಅಪರೂಪದ ಪ್ರಾಣಿ ಮೈಸೂರು ಮೃಗಾಲಯದಲ್ಲಿ ಮಾತ್ರ ಹಾಲಿ ಜೀವಂತವಾಗಿರುವುದು.

ಮೈಸೂರು ಮೃಗಾಲಯದಲ್ಲಿ ಕಳೆದ 15 ವರ್ಷಗಳಿಂದ ಪೋಲೋಗೆ ಆಸರೆ ನೀಡಲಾಗಿದೆ. ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಗೋರಿಲ್ಲಾ ಕೀಪರ್ ಶಂಕರ್, ಕಳೆದ ಎಂಟು ವರ್ಷಗಳಿಂದ ಪೋಲೋನ ಆತ್ಮೀಯ ಸ್ನೇಹಿತ. ತನ್ನ ಎಲ್ಲಾ ಕಮಾಂಡ್ಗಳನ್ನು ಪಾಲಿಸುವ ಧೈತ್ಯ ವಾನರ ಪೋಲೋ
ಕಂಡರೇ ಶಂಕರ್ಗೂ ಅಷ್ಟೆ ಅಚ್ಚುಮೆಚ್ಚು. ಇವರ ಕಾರ್ಯ ಶ್ಲಾಘಿಸಿ ಅಮೇರಿಕಾದ ಸ್ವಯಂ ಸೇವಾ ಸಂಸ್ಥೆ `ಬೆಸ್ಟ್ ಗೋರಿಲ್ಲ ಕೀಪರ್' ಪ್ರಶಸ್ತಿ ಜತೆಗೆ ನಗದು ಬಹುಮಾನವನ್ನು ನೀಡಿ ಸನ್ಮಾನಿಸಿದೆ.

ಅಳಿವಿನಂಚಿನಲ್ಲಿರುವ ಈ ಪ್ರಾಣಿಗೆ ಈಗ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ವಿಶೇಷ ಕಾಳಜಿವಹಿಸಲಾಗುತ್ತಿದೆ. ಇದಕ್ಕಾಗಿಯೇ ಪ್ರತ್ಯೇಕ ಎನ್ಲ್ಕೋಷರ್ ನಿಮರ್ಿಸಲಾಗಿದ್ದು ಪ್ರತಿ ನಿತ್ಯ ಪೋಲೋವನ್ನು ಇಲ್ಲಿ ಬಿಡಲಾಗುತ್ತದೆ. ಈ ಸಂದರ್ಭದಲ್ಲೇ ಪೋಲೋ ಸಾರ್ವಜನಿಕರನ್ನು ಆಕಷರ್ಿಸುವುದು. ತನ್ನ ವಿಶಿಷ್ಠ ಭಾವಭಂಗಿಳಿಂದ ನೋಡುಗರ ಮನ ಸೆಳೆಯುತ್ತದೆ. ಪೋಲೋ ಸಂತಸಗೊಂಡಾಗ ಎದೆಯನ್ನು ಎರಡು ಕೈಗಳಿಂದ ಬಡಿದುಕೊಂಡು ತನ್ನ ಹರ್ಷ ಅಭಿವ್ಯಕ್ತ ಪಡಿಸುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
---------------------------------
ಚಿಂಪಾಂಜಿಯದ್ದೂ ಚಿಂತೆ....?

ಮಕ್ಕಳಿಗೆ ಶಾಲಾ ಹಂತದಲ್ಲಿ ಲೈಂಗಿಕ ಶಿಕ್ಷಣ ಅವಶ್ಯಕತೆಯೇ ಅಥವಾ ಅನಾವಶ್ಯಕತೆಯೇ ಎಂಬ ಚಚರ್ೆ ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿದೆ. ಆದರೆ ಇದಕ್ಕೆ ಪೂರಕವಾದ ಒಂದು ಸಮಸ್ಯೆ ಮೈಸೂರು ಮೃಗಾಲಯದಲ್ಲಿ ಎದುರಾಗಿದೆ. ಇಲ್ಲಿ ಗಂಡು-ಹೆಣ್ಣು ಎರಡು ಗುಂಪಿಗೆ ಸೇರಿದ ಚಿಂಪಾಂಜಿಗಳಿದ್ದರೂ ಸಂತಾನ ಮಾತ್ರ ಬೆಳೆಯುತ್ತಿಲ್ಲ. ಇದೇ ಮೃಗಾಲಯದ ಆಡಳಿತವರ್ಗದವರ ತಲೆನೋವಾಗಿರುವುದು. ಇದಕ್ಕೆ ಕಂಡುಕೊಂಡ ಉಪಾಯ ಚಿಂಪಾಂಜಿಗೆ ಲೈಗಿಂಕ ಶಿಕ್ಷಣ ಕೊಡಿಸುವುದು. ಆದರೆ ಫಲ ಮಾತ್ರ ಶೂನ್ಯ.

ಮೈಸೂರು ಮೃಗಾಲಯದಲ್ಲಿ ವಾಸಿಸುತ್ತಿರುವ ಚಿಂಪಾಂಜಿಗಳದ್ದೊಂದು ವಿಚಿತ್ರ ಸಮಸ್ಯೆ. ಈ ಚಿಂಪಾಂಜಿಗಳು ಸಣ್ಣ ಮರಿಗಳಾಗಿರುವಾಗಲೇ ಇಲ್ಲಿಗೆ ಕರೆತರಲಾಗಿತ್ತು. ಪರಿಣಾಮ ಇವಕ್ಕೆ ಪ್ರಾಯದ ಪ್ರಾಣಿಗಳ ಸರಸ ಸಲ್ಲಾಪದ ಬಗೆಗೆ ಅರಿವೇ ಇಲ್ಲ. ಇದು ಚಿಂಪಾಂಜಿ ಸಂತತಿ ಮೇಲೆ ಈಗ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಪ್ರಸ್ತುತ ಮೃಗಾಲಯದಲ್ಲಿ 5 ಚಿಂಪಾಂಜಿಗಳಿವೆ. ಈ ಪೈಕಿ 59ವರ್ಷ ದಾಟಿರುವ ವಾಲಿಯೇ ಸಿನಿಯರ್ ಮೋಸ್ಟ್. ಜತೆಗೆ ಪಕ್ಕಾ ಲೋಕಲ್. ಅಂದ್ರೆ ಇದೇ ಮೃಗಾಲಯದಲ್ಲಿ ಹುಟ್ಟಿದ್ದು. ಇದರ ಜತೆಗೆ ಮೈಸನ್ - ಗುರು ಹಾಗೂ ಮಿರಿಲ್ಲಾ- ಗಂಗಾ ಅನ್ನುವ ಚಿಂಪಾಂಜಿಗಳು ಸಹ ಇವೆ. ಗಂಡು-ಹೆಣ್ಣು ಚಿಂಪಾಂಜಿಗಳು ಒಟ್ಟಾಗಿಯೇ ಇದ್ದರು ಸಂತತಿ ಮಾತ್ರ ಬೆಳೆಯುತ್ತಿಲ್ಲ. ಕಾರಣ ಈ ಚಿಂಪಾಂಜಿಗಳಿಗೆ ಲೈಗಿಂಕ ಜ್ಞಾನದ ಬಗ್ಗೆ ಅರಿವಿಲ್ಲದಿರುವುದು.

ಈ ಹಿನ್ನೆಲೆಯಲ್ಲಿ ಮೃಗಾಲಯದವರು ಚಿಂಪಾಂಜಿಗಳಿಗೆ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅನೇಕ ಸರ್ಕಸ್ಸ್ಗಳನ್ನು ಮಾಡಿದರು. ಕಡಗೆ ಇವುಗಳಿಗೆ `ನೀಲಿ ಚಿತ್ರ'ಗಳನ್ನು ಸಹ ಪ್ರದಶರ್ಿಸಿ ಲೈಂಗಿಕ ಜ್ಞಾನ ಮೂಡಿಸಲು ಪ್ರಯತ್ನಿಸಲಾಯಿತು. ಆದರೂ ನೋ ಇಂಪ್ರೂಮೆಂಟ್ಸ್...ಸಂತತಿ ಮಾತ್ರ ಬೆಳೆಯುತ್ತಲೇ ಇಲ್ಲ.
--------------------------

================================